#ಯಕ್ಷಮಂದಾರ
Saturday, December 5, 2020
#ಯಕ್ಷಮಂದಾರ - 45 | ಮಂದಾರ್ತಿ ರಘುರಾಮ ಮಡಿವಾಳ | Mandarthi Raghuram Madivala | ಹಿರಿಯ ವೇಷಧಾರಿ | ಯಕ್ಷಸಾಧಕರು
ಇದು ಯಕ್ಷಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ.. ಇಂದಿನ ನಮ್ಮ ಯಕ್ಷಸಾಧಕರು... ಬಡಗುತಿಟ್ಟಿನ ಹಿರಿಯ ಸಂಪ್ರದಾಯಬದ್ದ ಹಿರಿಯ ವೇಷಧಾರಿ,ಮಂದಾರ್ತಿ ಮೇಳದ ಕಲಾವಿದರಾದ ಮಂದಾರ್ತಿ ರಘುರಾಮ ಮಡಿವಾಳರು... ಇವರು ಉಡುಪಿ ಜಿಲ್ಲೆಯ ಮಂದಾರ್ತಿಯಲ್ಲಿ ಶ್ರೀಯುತ ಕುಷ್ಠ ಮಡಿವಾಳ ಮತ್ತು ಲಚ್ಚ ಮಡಿವಾಳ್ತಿಯವರ ಪುಣ್ಯಗರ್ಭದಲ್ಲಿ ದಿನಾಂಕ:30.10.1960ರಲ್ಲಿ ಜನಿಸಿದರು.. ಆ ಕಾಲದಲ್ಲಿ ಇವರ ತಂದೆ ಕುಷ್ಠ ಮಡಿವಾಳರು ಮಂದಾರ್ತಿ ಮೇಳದಲ್ಲಿ ಗಣಪತಿ ಪೆಟ್ಟಿಗೆ ಹೊರುವ ಕೆಲಸವನ್ನು ನಿರ್ವಹಿಸುತ್ತಿದ್ದರು.. ಆದ್ದರಿಂದಲೇ ಬಾಲ್ಯದಲ್ಲಿಯೇ ಇವರಿಗೆ ಯಕ್ಷಗಾನದ ಕುರಿತು ಆಸಕ್ತಿ ಇದ್ದಿತ್ತು.. ಐದನೆಯ ತರಗತಿಯವರೆಗೆ ವಿದ್ಯಾಭ್ಯಾಸ ಮುಗಿಸಿದ ಇವರು ತನ್ನ ಹನ್ನೊಂದನೆಯ ವಯಸ್ಸಿನಲ್ಲಿ ತನ್ನ ತಂದೆ ತಾಯಿಯವರ ಅಭಿಲಾಷೆಯಂತೆ ಉಡುಪಿಯ ಯಕ್ಷಗಾನ ಕೇಂದ್ರವನ್ನು ಸೇರಿಕೊಂಡು ಗುರುಗಳಾದ ದಶಾವತಾರಿ ದಿ.ವೀರಭದ್ರ ನಾಯ್ಕರು, ಹಿರಿಯಡ್ಕ ಗೋಪಾಲ ರಾಯರು, ನೀಲಾವರ ರಾಮಕೃಷ್ಣಯ್ಯನವರಂತ ಅಗ್ರಮಾನ್ಯರ ಗುರುತನದಲ್ಲಿ ಮೂರುವರ್ಷಗಳ ಕಾಲ ಯಕ್ಷಗಾನದ ಹೆಜ್ಜೆಗಾರಿಕೆ,ಸಾಂಪ್ರದಾಯಿಕ ರಂಗನಡೆ,ಮಾತುಗಾರಿಕೆ,ಪ್ರಸಂಗಜ್ಞಾನ, ಪಾತ್ರನಿರ್ವಹಣೆ ಸೇರಿದಂತೆ ಯಕ್ಷಗಾನದ ವಿವಿಧ ವಿಭಾಗದಲ್ಲಿ ಯಕ್ಷಶಿಕ್ಷಣವನ್ನು ಪಡೆದರು.. ಉಡುಪಿ ಬಸವ ನಾಯ್ಕರ ಪ್ರೇರಣೆಯಿಂದ ಗುರು ವೀರಭದ್ರ ನಾಯ್ಕರ ಮಾರ್ಗದರ್ಶನದಲ್ಲಿ ಬಡಗಿನ ಸಾಂಪ್ರದಾಯಿಕ ಶೈಲಿಯನ್ನು ಮೈಗೂಡಿಸಿಕೊಂಡರು.. ಜೋಡಾಟಗಳಲ್ಲಿ ಅತಿ ಎತ್ತರದ ಮುಂಡಾಸುಗಳನ್ನು ಕಟ್ಟಿ ಇವರು ಅಬ್ಬರದಿಂದ ರಂಗ ಪ್ರವೇಶಗೈಯುತ್ತಿದ್ದಂತೆ, ರಂಗಸ್ಥಳದ ಮೇಲೆ ಕಟ್ಟಿದ ಪರದೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸುತ್ತಿದ್ದದ್ದು ವಿಶೇಷವಾಗಿತ್ತು.. ಮಂದಾರ್ತಿ ಮೇಳದಲ್ಲಿ ಪ್ರಪ್ರಥಮ ಬಾರಿಗೆ ಗೆಜ್ಜೆಕಟ್ಟಿ ರಂಗಪ್ರವೇಶ ಮಾಡಿದ ಇವರು, ಬಾಲಗೋಪಾಲ ಮೊದಲಾದ ವೇಷಗಳನ್ನು ನಿರ್ವಹಿಸುತ್ತ ಹಂತ ಹಂತವಾಗಿ ಮೇಲೇರಿದರು.. ನಂತರ ಬಡಗುತಿಟ್ಟಿನ ಸುಪ್ರಸಿದ್ದ ಮೇಳಗಳಾದ ಇಡಗುಂಜಿ,ಕಮಲಶಿಲೆ,ಸೌಕೂರು,ಪೆರ್ಡೂರು ಮೇಳಗಳಲ್ಲಿ ಸೇವೆಸಲ್ಲಿಸಿದ ಇವರು, ಸುದೀರ್ಘ ಮೂವತ್ತೈದು ವರ್ಷಗಳಿಂದ ಮಂದಾರ್ತಿ ಮೇಳದಲ್ಲಿ ಸೇವೆಸಲ್ಲಿಸುತ್ತಿದ್ದು,ಪ್ರಸ್ತುತ ಕೆಲವು ವರ್ಷಗಳಿಂದ ಎರಡನೆಯ ವೇಷದಾರಿಯಾಗಿ ಶ್ರೀದೇವಿಯ ಕಲಾಕೈಂಕರ್ಯವನ್ನು ಮುಂದುವರಿಸುತ್ತ,ಸುದೀರ್ಘ 46 ವರ್ಷಗಳ ಯಕ್ಷತಿರುಗಾಟವನ್ನು ಪೂರೈಸಿದ್ದಾರೆ.. ನೀಳಕಾಯ ಮತ್ತು ಸದೃಢವಾದ ಶರೀರ,ಗಂಭೀರ ನಿಲುವು, ಗಜ ಗಾಂಭೀರ್ಯದ ಹೆಜ್ಜೆಗಾರಿಕೆ, ಸ್ಪಷ್ಟವಾದ ಸ್ವರಬಾರವನ್ನು ಹೊಂದಿರುವ ಇವರ ಶಲ್ಯ,ವೀರಮಣಿ,ದುರ್ಜಯ, ಜಾಂಬವ,ಋತುಪರ್ಣ,ಕಮಲಭೂಪ,ಹಿರಣ್ಯಕಶ್ಯಪು,ಭೀಮ, ಯಮ ಮೊದಲಾದ ಪಾತ್ರಗಳಲ್ಲಿ ರಂಗಸ್ಥಳದಲ್ಲಿ ರೋಮಾಂಚನಕಾರಿ ವಾತಾವರಣವನ್ನು ಮೂಡಿಸಬಲ್ಲ ಇವರು,ಯಕ್ಷಗಾನದ ಯುಗಪವರ್ತಕ ದಿ.ಕಾಳಿಂಗ ನಾವಡ,ಮಲ್ಪೆ ಶಂಕರನಾರಾಯಣ ಸಾಮಗ,ದಿ.ಕುಮಟಾ ಗೋವಿಂದ ನಾಯ್ಕ,ದಿ.ಕೆರೆಮನೆ ಶಂಭು ಹೆಗಡೆ,ಎಂ.ಎ. ನಾಯ್ಕ,ಗೋಡೆ ನಾರಾಯಣ ಹೆಗಡೆಯವರಂತಹ ಯಕ್ಷದಿಗ್ಗಜರೊಂದಿಗೆ ಪಾತ್ರನಿರ್ವಹಿಸಿ,ಸೈ ಎನಿಸಿಕೊಂಡಿದ್ದಾರೆ... ನಾಡಿನಾದ್ಯಂತ ಯಕ್ಷಗಾನ ಪ್ರದರ್ಶವನ್ನು ನೀಡಿ,ಯಕ್ಷಗಾನ ಕಲಾಭಿಮಾನಿಗಳ ಪ್ರೀತಿ ಮತ್ತು ಮನ್ನಣೆಗೆ ಪಾತ್ರರಾಗಿರುವ ಇವರಿಗೆ,ಕನ್ನಡ ವಾರ್ತಾ ಮತ್ತು ಪ್ರಚಾರ ಇಲಾಖೆ,ಬೆಂಗಳೂರು... ಕನ್ನಡ ಸಂಘ ದೆಹಲಿ,.. ಸುಮಕೃಷ್ಣ ಪ್ರಶಸ್ತಿ,.. ಮಡಿವಾಳ ಸಂಘ,..ರಂಗಸ್ಥಳ ಪ್ರಶಸ್ತಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದೆ.. ಸರಳ ಮತ್ತು ಸಜ್ಜನರಾದ ಇವರು ಮಂದಾರ್ತಿಯಲ್ಲಿ ಸ್ವಲ್ಪ ಕೃಷಿ ಕಾಯಕದೊಂದಿಗೆ,ಪತ್ನಿ, ಇಬ್ಬರು ಗಂಡುಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸುಖ ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ... ಇವರ ಮುಂದಿನ ವೃತ್ತಿ ಮತ್ತು ವೈಯುಕ್ತಿಕ ಬದುಕು ಸುಗಮವಾಗಿ ಸಾಗಲಿ,ಇವರಿಗೆ ಜಗನ್ಮಾತೆ ಮಂದಾರ್ತಿ ಶ್ರೀದುರ್ಗಾ ಪರಮೇಶ್ವರಿ ತಾಯಿಯೂ ಸರ್ವ ಸಂಪದವನ್ನು ನೀಡಿ ಕಾಪಾಡಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ... ಸಾಹಿತ್ಯ: ಹಾಲಾಡಿ ಸಂತೋಷ ಶೆಟ್ಟಿ.. ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ.. ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮ🌀ಯಕ್ಷ💥ಮಂದಾರ🌀 ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ.. ನಮ್ಮ 🌀ಯಕ್ಷ💥ಮಂದಾರ🌀ಯೂಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಪೇಜ್.. ನ್ನು download ಮಾಡಿಕೊಳ್ಳಿ..ಮತ್ತು ನಾವು upload ಮಾಡುವ ಎಲ್ಲ ಯಕ್ಷಗಾನ ವಿಡಿಯೋಗಳ ಮಾಹಿತಿ ಪಡೆಯಿರಿ..ನಮ್ಮ ವಿಡಿಯೋಗಳನ್ನು ನೋಡಿ like ಮಾಡಿ,share ಮಾಡಿ ಪ್ರೋತ್ಸಾಹಿಸಿ... ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸಿ, ಪ್ರೋತ್ಸಾಹಿಸಿ.. ಧನ್ಯವಾದಗಳು🙏🙏🙏 *Yakshamandara* Issue 54 This is an exhibition of the achievements and life of yakshaganaartists. Today's yakshaganas... The older traditional dressed in the badgutitti, the artists of The Mandarti Mela, Mandarthi Raghuram Awadh... He was born on 30.10.1960 at The Holy Garbha of Mr. Kushtha Madhavan and Lachcha Madivalthi in Mandarthi in Udupi District. At that time, his father, Kushtha Madhavan, was carrying the Ganapati box at the Mandarthi Mela. That is why he was interested in Yakshagana in his early childhood. He completed his studies till the age of fifth and joined the Yakshagana Centre at Udupi at the age of 11 and received yakshagana education in various disciplines including the three years of yakshagana footprints, traditional theatre, speech, context, and role-playing. Inspired by Udupi Basava Nayak, he embraced the traditional style of the garbage under the guidance of Guru Veerbhadra Nayak. The high-rise of the saints in the shoes was the most remarkable of the screen styling the stage as they entered the stage with a roar. He made his first appearance at the Mandarti Mela and stepped up stage by dressing up balgopal. Later, he served in the famous melas of Badaguthi, Idagunji, Kamalashila, Saukur, Perdur and has served in The Mandarti Mela for 35 years and has completed a long 46 years of yakshagana, continuing to perform the art of Sridevi as a second dresser for some years. He has a long and strong body, a strong, serious, a dignified, a clear voice, and he can create a thrilling atmosphere in the theatre in the roles of Veeramani, Durjaya, Jambava, Rituparna, Kamalabhupa, Hiranyakashyapu, Bhima, Yama, yama, yakshagana yugapavartaka d.kalinga navada, malpe samagarama, d.govinda naik, d.keremane, m.a. Naik has played a role with yakshaganas like Godu, Narayana Hegde and has become a sai. https://www.youtube.com/channel/UCsrL https://www.facebook.com/groups/27334
Subscribe to:
Post Comments (Atom)
#ಯಕ್ಷಮಂದಾರ - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ |
🌀ಯಕ್ಷ💥ಮಂದಾರ🌀 #ಯಕ್ಷಮಂದಾರ - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ...
-
#ಯಕ್ಷಮಂದಾರ #ಯಕ್ಷಮಂದಾರ - 39 | ತೊಂಬಟ್ಟು ವಿಶ್ವನಾಥ ಆಚಾರ್ಯ | Thumbattu Vishwanath...
-
🌀ಯಕ್ಷ💥ಮಂದಾರ🌀 #ಯಕ್ಷಮಂದಾರ - 18 | ಜಯಾನಂದ ಸಂಪಾಜೆ | Jayanand Sampaje | ಹನುಮಗಿರಿ ಮೇಳ | Hanumagiri Mela...
No comments:
Post a Comment