#ಯಕ್ಷಮಂದಾರ
#ಯಕ್ಷಮಂದಾರ - 43 | ಪ್ರಸಾದ್ ಕುಮಾರ್ ಮೊಗೆಬೆಟ್ಟು | Prasad Kumar Mogebettu | ಯಕ್ಷ ಕವಿ | ಯಕ್ಷಗುರು | ಬಾಗವತರು
ಇದು ಯಕ್ಷಕಲಾವಿದರ ಸಾದನೆ ಮತ್ತು ಜೀವನಗಾಥೆಯ ಅನಾವರಣ...
ಇಂದಿನ ನಮ್ಮ ಯಕ್ಷಸಾಧಕರು ಛಂದೋಬದ್ದ ಯಕ್ಷ ಕವಿ,ಯಕ್ಷಗುರು,ಬಾಗವತರು ಮತ್ತು ಪ್ರಸಿದ್ಧ ಪ್ರಸಂಗಕರ್ತರಾದ *ಪ್ರಸಾದ *ಕುಮಾರ್*ಮೊಗೆಬೆಟ್ಟುರವರು* ...
ಶ್ರೀಯುತರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೆಬೆಟ್ಟು ಎಂಬಲ್ಲಿ ಪ್ರಸಿದ್ದ ಯಕ್ಷಗಾನ ಕಲಾವಿದರಾಗಿದ್ದ ಮೊಗೆಬೆಟ್ಟು *ಹೆರಿಯ ನಾಯ್ಕ* ಮತ್ತು *ಗುಲಾಬಿ* ದಂಪತಿಗಳ ಪುತ್ರನಾಗಿ ದಿನಾಂಕ: __20.06.1983_ ರಲ್ಲಿ ಜನಿಸಿದರು..
ಯಕ್ಷಗಾನ ಕಲೆಯೂ ಇವರಿಗೆ ರಕ್ತಗತವಾಗಿ ಬಂದಿತ್ತು..ಪ್ರಸಿದ್ಧ ವೇಷಧಾರಿಯಾಗಿದ್ದ ಇವರ ತಂದೆಯವರು ತನ್ನ ಶಿಷ್ಯರಿಗೆ ಅಭ್ಯಾಸ ಮಾಡಿಸುತ್ತಿದ್ದ ಯಕ್ಷಗಾನದ ಕ್ರಮವನ್ನು ನೋಡಿ ಆಕರ್ಷಿತರಾದ ಇವರು,ದಿ.ಕಾಳಿಂಗ ನಾವಡರ ಕಂಠಸಿರಿಗೆ ಮನಸೋತು ಅವರ ಯಕ್ಷಗಾನದ ಪದ್ಯಗಳತ್ತ ಆಕರ್ಷಿತರಾಗಿದ್ದರು.. ತನ್ನ ತಂದೆಯವರಿಂದ ಯಕ್ಷಗಾನದ ರಂಗಕ್ರಮ ಮತ್ತು ಪ್ರಸಂಗನಡೆಯನ್ನು ನೋಡಿ ಅಭ್ಯಸಿಸುತ್ತ ಸಾಂಪ್ರಾದಾಯಿಕ ಸೊಗಡಿನ ಯಕ್ಷಪರಂಪರೆಯನ್ನು ಮೈಗೂಡಿಸಿಕೊಂಡು ತನ್ನ ಹತ್ತರ ಹರೆಯದಲ್ಲಿ ಮೊಗೆಬೆಟ್ಟು ಚಿಕ್ಕಮ ಹೈಗುಳಿ ಯಕ್ಷಗಾನ ಕಲಾ ಸಂಘದಲ್ಲಿ ದಿ.ಹಳ್ಳಾಡಿ ಸುಬ್ರಾಯ ಮಲ್ಯರ ನಿರ್ದೇಶನದಲ್ಲಿ ಬಾಲ ಕಲಾವಿದನಾಗಿ ಗೆಜ್ಜೆಕಟ್ಟಿ ಬಬ್ರುವಾಹನನಾಗಿ ರಂಗಪ್ರವೇಶ ಮಾಡಿದ್ದರು.. ನಂತರ 1998ರಲ್ಲಿ ಉಡುಪಿ ಯಕ್ಷಗಾನ ಕೇಂದ್ರವನ್ನು ಸೇರಿಕೊಂಡ ಇವರು ನೀಲಾವರ ಲಕ್ಷ್ಮೀನಾರಾಯಣಯ್ಯ ಮತ್ತು ಸತೀಶ ಕೆದ್ಲಾಯರಿಂದ ಪ್ರಥಮ ವರ್ಷದ ಯಕ್ಷಶಿಕ್ಷಣವನ್ನು ಪಡೆದು, ರಾಜ್ಯಪ್ರಶಸ್ತಿ ಪುರಸ್ಕೃತರಾದ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣರಿಂದ ಸಾಂಪ್ರಾದಾಯಿಕ ನೃತ್ಯ,ಅಭಿನಯ, ಪ್ರಸಂಗ ನಿರ್ದೇಶನ, ಮತ್ತುರಂಗ ಕೊರೊಯೋಗ್ರಾಫಿಯನ್ನು ಕರಗತ ಮಾಡಿಕೊಂಡರು. ಯಕ್ಷಗಾನ ಕೇಂದ್ರದ ಮತ್ತಿಬ್ಬರು ಗುರುಗಳಾದ ದೇವದಾಸ ರಾವ್ ಮತ್ತು ಕೃಷ್ಣಮೂರ್ತಿ ಭಟ್ಟರಿಂದ ಯಕ್ಷಗಾನದ ರಂಗ ನಡೆಯನ್ನು ಆರ್ಜಿಸಿಕೊಂಡ ಇವರು,.ಹಿರಿಯ ಬಾಗವತರಾಗಿದ್ದ ಗೋರ್ಪಾಡಿ ವಿಠಲ ಪಾಟೀಲರಲ್ಲಿ ಪರಂಪರೆಯ ಬಾಗವತಿಕೆಯ ಶಿಕ್ಷಣವನ್ನು ಪಡೆದರು.. ಛಂದೋಬ್ರಹ್ಮ ಡಾ. ಶಿಮಂತೂರು ನಾರಾಯಣ ಶೆಟ್ಟಿಯವರ ನೇರ ಶಿಷ್ಯರಾಗಿರುವ ಪ್ರಸಿದ್ಧ ಛಾಂದಸ ಗಣೇಶ ಕೊಲೆಕಾಡಿಯವರಲ್ಲಿ ಛಂದಸ್ಸಿನ ಕುರಿತು ಶಿಕ್ಷಣವನ್ನು ಪಡೆದಿದ್ದು ನಂತರ 2005ರಿಂದ ತಾನು ಯಕ್ಷ ಶಿಕ್ಷಣವನ್ನು ಪಡೆದ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗುರುವಾಗಿ ಸೇವೆ ಸಲ್ಲಿಸಿದ್ದರು...
ಯಕ್ಷಗಾನದ ಗುರುವಾಗಿ, ಬಾಗವತರಾಗಿ, ರಂಗ ನಿರ್ದೇಶಕರಾಗಿ,ಛಂದೋಬದ್ದ ಯಕ್ಷ ಕವಿಯಾಗಿ, ಪ್ರಸಂಗಕರ್ತರಾಗಿ, ಕಲಾವಿದರಾಗಿ ಯಕ್ಷರಂಗದಲ್ಲಿ ಚಿರಪರಿಚಿತರಾಗಿರುವ ಇವರು ಕರ್ನಾಟಕವಷ್ಟೇ ಅಲ್ಲದೆ ಮುಂಬೈ, ಕೊಲ್ಕತ್ತಾ,ಮದ್ರಾಸ್, ನಾಗಪುರ,ಬಿಹಾರ್, ಗೋವಾ,ಭುವನೇಶ್ವರ,ಸಿಕ್ಕಿಂ, ಒರಿಸ್ಸಾ,ಕೇರಳ,ತಮಿಳುನಾಡು ಪುರಿ, ಗುಜರಾತ್ ಮೊದಲಾದ ರಾಜ್ಯಗಳಲ್ಲಿಯೂ ಮತ್ತು ವಿದೇಶಗಳಾದ ಬೆಲ್ಜಿಯಂ, ಆಸ್ಟ್ರೇಲಿಯಾ,ಐರ್ಲೆಂಡ್,ದುಬೈ,ಸ್ವೀಡ್ಜರ್ಲ್ಯಾಂಡ್, ಸಿಂಗಾಪುರ ಮೊದಲಾದ ವಿದೇಶಗಳಲ್ಲಿಯೂ ಕಾರ್ಯಕ್ರಮಗಳನ್ನು ನೀಡಿದ್ದಾರೆ..
ವಿಶ್ವ ಕುಂದಾಪುರ ದಿನಾಚರಣೆಯ ಅಂಗವಾಗಿ ಸಂಪೂರ್ಣ ಕುಂದಗನ್ನಡದಲ್ಲಿಯೇ ರಚಿಸಿ, ನಿರ್ದೇಶಿಸಿದ *ನರಹರಿ ಹೊಯ್ಕೈ* ಎನ್ನುವ ಕುಂದಗನ್ನಡದ ಪ್ರಪ್ರಥಮ ಪೌರಾಣಿಕ ಯಕ್ಷಗಾನ ಪ್ರಸಂಗ ಇವರ ಸೃಜನಶೀಲ ಅವಿಷ್ಕಾರಕ್ಕೆ ಮುನ್ನುಡಿ ಬರೆಯಿತಲ್ಲದೆ ಅಪಾರವಾದ ಜನಮನ್ನಣೆಗೆ ಪಾತ್ರವಾಗಿ ಯಶಸ್ವಿ ಪ್ರದರ್ಶನ ಕಂಡಿತು...ಪ್ರಸಿದ್ಧ ಕಲಾವಿದರ ಸಂಯೋಜನೆಯಲ್ಲಿ ಆಯೋಜಿಸಿದ್ದ *ಮೊಗವೀರ ಬಾಲೆ* ಯ ದೃಶ್ಯ ಸುರುಳಿಯ ನಿರ್ದೇಶನ,ಮಂಗಳೂರು ಆಕಾಶವಾಣಿಯಲ್ಲಿ 50 ಕ್ಕೂ ಹೆಚ್ಚು ತಾಳಮದ್ದಲೆಯ ಕಾರ್ಯಕ್ರಮ, ಬೆಂಗಳೂರು ಆಕಾಶವಾಣಿ ಕಲಾವಿದರಾಗಿ ರಂಗಕರ್ಮಿ ಗುರುರಾಜ ಮಾರ್ಪಳ್ಳಿ ನಿರ್ದೇಶಿತ ತುಳುನಾಟಕ *ಆಯನಕಾಲ* ದಲ್ಲಿ ಪಾತ್ರನಿರ್ವಹಣೆ, ಡಾ.ಶಿವರಾಮ ಕಾರಂತರ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಕಲಾವಿದರಾಗಿ ಪಾತ್ರನಿರ್ವಹಣೆ , ಪ್ರಸಿದ್ಧ ರಂಗ ನಿರ್ದೇಶಕ ಚಿದಂಬರ ರಾವ್ ಜಂಟಿಯವರ *ಉತ್ತರ ರಾಮಾಯಣ* ಯಕ್ಷ ನಾಟಕದಲ್ಲಿ ಅಭಿನಯ , ರಾಜ್ಯಮಟ್ಟದ ಯಕ್ಷಗಾನ ಕಮ್ಮಟ,ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಹದಿನೈದಕ್ಕೂ ಹೆಚ್ಚು ಯಕ್ಷಗಾನ ಸಂಘಗಳಲ್ಲಿ ಯಕ್ಷಗುರುವಾಗಿ, ಅತಿಥಿ ಬಾಗವತರಾಗಿ ಮತ್ತು ಅನೇಕ ತಾಳಮದ್ದಲೆಯ ಕಾರ್ಯಕ್ರಮಗಳಲ್ಲಿ ಬಾಗವಹಿಸಿ ಜನಮನ್ನಣೆ ಪಡೆದಿದ್ದಾರೆ..
ಸಾಲಿಗ್ರಾಮ ಮಂದಾರ್ತಿ,ಗೋಳಿಗರಡಿ,ಜಲವಳ್ಳಿ ಮೇಳ ಸೇರಿದಂತೆ ತೆಂಕು ಮತ್ತು ಬಡಗುತಿಟ್ಟಿನ ಹೆಚ್ಚಿನ ವೃತ್ತಿಪರ ಮೇಳಗಳಲ್ಲಿ ಅತಿಥಿ ಬಾಗವತರಾಗಿ ಸೇವೆಸಲ್ಲಿಸಿರುವ ಇವರು,ಅಭಿಮನ್ಯು ಪ್ರಸೇನ,ಬಬ್ರುವಾಹನ,ಶ್ರೀಕೃಷ್ಣ,ರಾಮ,ಋತುಪರ್ಣ,ಪುಷ್ಕಳ,ಶನೀಶ್ವರ,ಧರ್ಮಾಂಗದ ಮೊದಲಾದ ಪುರುಷ ಪಾತ್ರಗಳನ್ನು,ಸೀತೆ,ಸುಭದ್ರೆ,ರಂಭೆ, ಭ್ರಮರಕುಂತಲೆ,ತ್ರೈಲೋಕ ಸುಂದರಿ ಮೊದಲಾದ ಸ್ತ್ರೀಪಾತ್ರಗಳನ್ನು ಕಿರಾತ ವೇಷ ಮತ್ತು ಹಾಸ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ...
ಇವರು ದಿ.ಪದ್ಮಶ್ರೀ ಚಿಟ್ಟಾಣಿ, ದಿ,ಜಲವಳ್ಳಿ ವೆಂಕಟೇಶ ರಾವ್,ಕೊಳ್ಯೂರು ರಾಮಚಂದ್ರ ರಾವ್,ಸುಬ್ರಮಣ್ಯ ದಾರೇಶ್ವರ, ಪಟ್ಲಸತೀಶ ಶೆಟ್ಟಿ,ಪುತ್ತಿಗೆ ರಘುರಾಮ ಹೊಳ್ಳಕೊಂಡದಕುಳಿ ರಾಮಚಂದ್ರ ಹೆಗ್ಡೆ, ಕೃಷ್ಣಯಾಜಿ ಬಳ್ಕೂರು,ದಿ.ಕಣ್ಣಿಮನೆ ಗಣಪತಿ ಭಟ್,ದಿ.ಮೊಳಹಳ್ಳಿ ಹೆರಿಯ ನಾಯ್ಕ,ಐರೋಡಿ ಗೋವಿಂದಪ್ಪ , ದಿ.ಅರಾಟೆ ಮಂಜುನಾಥ, ಹಾಲಾಡಿ ರಾಘವೇಂದ್ರ ಮಯ್ಯ,ಸುರೇಶ ಶೆಟ್ಟಿ ಶಂಕರನಾರಾಯಣ, ವಿದ್ಯಾದರ ರಾವ್ ಜಲವಳ್ಳಿ,ಹೆರಂಜಾಲು ಗೋಪಾಲ ಗಾಣಿಗ, ಕಾವ್ಯಶ್ರೀ ಆಜೇರು, ರವಿಚಂದ ಕನ್ನಡಿಕಟ್ಟೆ, ಸತ್ಯನಾರಾಯಣ ಪುಣಿಂಚಿತ್ತಾಯ,ಗಿರೀಶ್ ರೈ,ರಾಘವೇಂದ್ರ ಆಚಾರ್ಯ ಜನ್ಸಾಲೆ ಮೊದಲಾದವರೊಂದಿಗೆ ರಂಗವನ್ನು ಹಂಚಿಕೊಂಡಿದ್ದಾರೆ..
ಅತ್ಯಂತ ಸೃಜನಶೀಲ ಮತ್ತು ಕ್ರೀಯಾತ್ಮಕವಾದ ವ್ಯಕ್ತಿತ್ವವನ್ನು ಹೊಂದಿರುವ ಇವರು ಅನೇಕ ಸಮಾಜಮುಖಿ ಸಂಘಟನೆಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.. ವಾಗ್ಜ್ಯೋತಿ ಅಂದ,ಮೂಕ ಮತ್ತುಕಿವುಡ ಮಕ್ಕಳ ಶಾಲೆಯ ವಿಕಲಚೇತನ ಮಕ್ಕಳು ಸೇರಿದಂತೆ 1600ಕ್ಕೂ ಹೆಚ್ಚು ಶಾಲಾವಿದ್ಯಾರ್ಥಿಗಳಿಗೆ ಯಕ್ಷಶಿಕ್ಷಣವನ್ನು ನೀಡುತ್ತ ಅವರಿಂದ ವಿಶೇಷ ಕಾರ್ಯಕ್ರಮಗಳಲ್ಲಿ ಯಕ್ಷಗಾನ ಮತ್ತು ತಾಳಮದ್ದಳೆಯ ಪ್ರದರ್ಶನವನ್ನು ಮಾಡಿಸಿ,ಯಕ್ಷಗಾನದ ಆಸಕ್ತಿ ಮೂಡಿಸುವ ಮೂಲಕ ಮುಂದಿನ ತಲೆಮಾರಿಗೆ ಯಕ್ಷಗಾನವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ...ಯಕ್ಷ ಕವಿಯಾಗಿಯೂ ಗುರುತಿಸಿಕೊಂಡಿರುವ ಇವರ 1000ಕ್ಕೂ ಹೆಚ್ಚು ಯಕ್ಷ ಬರಹಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಬೆಳಕು ಕಂಡಿದೆ.. ಬಡಗುತಿಟ್ಟಿನ ಸಮಗ್ರ ಕಲಾವಿದರ ವ್ಯಕ್ತಿ ಪರಿಚಯದ *ಯಕ್ಷೋಪಾಸಕರು* ಎಂಬ ಮಹಾಗ್ರಂಥ ಯಕ್ಷಗಾನ ಅಕಾಡೆಮಿಯಿಂದ ಪ್ರಕಟವಾಗಿದೆ..
ಇವರ ಅಮರಾಮೃತ,ಅಮೃತಗಳಿಗೆ ಮತ್ತು ದುರ್ಗಾಷ್ಟಮಿ ಎನ್ನುವ ಯಕ್ಷಗಾನ ಪ್ರಸಂಗಗಳು ಶತದಿನೋತ್ಸವವನ್ನು ಆಚರಿಸಿಕೊಂಡಿದೆ.. ಅಲ್ಲದೆ ಅಗ್ನಿವರ್ಷ,ಅಪೂರ್ವ ಅರ್ದಾಂಗಿ ಮತ್ತು ಇತ್ತೀಚಿನ ಕ್ರಾಂತಿಸೂರ್ಯ ಭಗತಸಿಂಹ ಮತ್ತು ಹಾಸ್ಯರತ್ನ ತೆನಾಲಿ ರಾಮಕೃಷ್ಣ ಸೇರಿದಂತೆ 28ಕ್ಕೂ ಹೆಚ್ಚು ಸಾಮಾಜಿಕ,ಕಾಲ್ಪನಿಕ,ಜಾನಪದೀಯ, ಪೌರಾಣಿಕ,ಐತಿಹಾಸಿಕ,ಪ್ರಸಂಗಗಳನ್ನು ರಚಿಸಿದ್ದಾರೆ.. ರಮೇಶ ಬೇಗಾರರ ಕಥಾ ಕಲ್ಪನೆಯ ಚಿತ್ರಲೇಖ ,ಗಂದ ಚಂದನ, ಶಿವಶಾಂಭವಿ, ಮೇಘಧಾರಿಣಿ, ಅರ್ಪಿತಾ ಹೆಗಡೆಯವರ ಕಥಾರಚನೆಯ ನಾಗರ ಪಂಚಮಿ, ಪ್ರೇಮಸಾರಂಗ, ಗಂಡುಗಲಿ ದೇವರಾಯ ಮಣೂರು ವಾಸುದೇವ ಮಯ್ಯರ ಕಥಾರಚನೆಯ ಇಂದ್ರನಾಗ,ಪುಷ್ಪ ಸಿಂದೂರಿ,ಸೂರ್ಯಸಂಕ್ರಾಂತಿ, ದೇವಗಂಗೆ ಮೊದಲಾದ ಪ್ರಸಂಗಗಳಿಗೆ ಸೇರಿದಂತೆ 10000 ಕ್ಕೂ ಹೆಚ್ಚು ಪದ್ಯರಚನೆಯನ್ನು ಮಾಡಿಕೊಟ್ಟಿದ್ದಾರೆ ಸಿಂಗಾರ ಪುಷ್ಪ,ಶೃಂಗಾರ ಕಾವ್ಯ, ಕೋಳಿಪಡೆ ರಂಗ,ಸ್ವಪ್ನ ಮಂಟಪ ಮೊದಲHe is The Padmashri Chittani, D.Jalavalli Venkateswara Rao, Koluru Ramachandra Rao, Subramanya Dareshwara, Patlasatish Shetty, Puttige Raghuram Holkondakuli Ramchandra Hegde, Krishnayaji Balkur, D.Kannimane Ganapati Bhatt, D.Molahalli Heri Nayak, Airodi Govindappa, D.Arate Manjunatha, Haladi Raghavendra Mayya, Suresh Shetty Shankaranarayana, Vidyadarrao Jalavalli, Heranjalu Gopal Ajeru, Ravi Kannincanda, Satyanarayana Puninchithaya, Girish Rai, Raghava.
He has a very creative and creative personality and has also been involved in many social organisations. The vagjoyothi, who is also a dumb and deaf children, is giving yakshagana education to more than 1600 school children, including the differently abled children of the dumb and deaf children, who are playing a major role in taking yakshagana to the next generation by performing yakshagana and talamdai in special programmes. His 1000 yaksha writings, also known as yaksha poets, have been illuminated in the famous newspapers of the state. The great book Yakshopasaka, a man of the entire artistof Badaguthitta, has been published by the Yakshagana Academy.
His amaramruta, amritagaland durgaashtami are the centenary of the yakshagana. He has written more than 28 social, imaginary, folk, mythological, historical and historical episodes including Agni Varsha, Apoorva Ardangi and the latest Kranti Surya Bhagatasimha and comedy Tenali Ramakrishna. Ramesh Begar's story story is written by Chitralekha, Ganda Chandana, Sivashambhavi, Meghdharini, Arpita Hegde's story-making Nagarpanchami, Premasaranga, Gandugali Devaraya Manur Vasudeva Mayya's story composer Indranaga, Pushpa Sinduri, Surya Sankranti, Devagange etc.