Thursday, January 14, 2021

#ಯಕ್ಷಮಂದಾರ - 50 | ಮಜ್ಜಿಗೆಬೈಲು ಆನಂದ ಶೆಟ್ಟಿ| Majjigebail Ananda Shetty | Mandarthi | ಯಕ್ಷ ಸಾದನೆ |

🌀ಯಕ್ಷ💥ಮಂದಾರ🌀


#ಯಕ್ಷಮಂದಾರ - 50 | ಮಜ್ಜಿಗೆಬೈಲು ಆನಂದ ಶೆಟ್ಟಿ| Majjigebail Ananda Shetty | Mandarthi | ಯಕ್ಷ ಸಾದನೆ |

ಇದು ಯಕ್ಷ ಕಲಾವಿದರ ಸಾದನೆ ಮತ್ತು ಜೀವನಗಾಥೆಯ ಅನಾವರಣ.. ಇಂದಿನ ನಮ್ಮ ಯಕ್ಷಸಾಧಕರು ಬಡಗುತಿಟ್ಟಿನ ಹಿರಿಯ ಕಲಾವಿದರಾದ ಮಜ್ಜೆಗೆಬೈಲು ಆನಂದ ಶೆಟ್ಟಿಯವರು... ಪರಂಪರೆಯ ಹಿರಿಯ ಕಲಾವಿದರ ಸಾಲಿನಲ್ಲಿ ಅಗ್ರಮಾನ್ಯರಾಗಿ ಗುರುತಿಸಿಕೊಂಡಿರುವ ಇವರು, ಸಾಂಪ್ರದಾಯಿಕ ಮತ್ತು ಯಕ್ಷಗಾನೀಯ ಚೌಕಟ್ಟಿನಲ್ಲಿಯೇ ಸಾಗಿ,ಬಡಗುತಿಟ್ಟಿನ ಯಕ್ಷಗಾನ ರಂಗಭೂಮಿಗೆ ಮೌಲ್ಯ ತಂದುಕೊಟ್ಟ ಹಿರಿಯ ಕಲಾವಿದರು.. ಬಡಗುತಿಟ್ಟಿನ ನಡುತಿಟ್ಟಿನ ಉಭಯಶೈಲಿಗಳಾದ ಹಾರಾಡಿ ಮತ್ತು ಮಟ್ಪಾಡಿ ತಿಟ್ಟುಗಳಲ್ಲಿ ಸಮನ್ವಯ ಸಾಧಿಸಿಕೊಂಡ ಆನಂದ ಶೆಟ್ಟರು, ಬಡಗುತಿಟ್ಟಿನ ಖ್ಯಾತ ಕಲಾವಿದರಾದ ಮಜ್ಜಿಗೆಬೈಲು ಚಂದಯ್ಯ ಶೆಟ್ಟಿ ಮತ್ತು ಚಂದಮ್ಮ ಶೆಡ್ತಿ ದಂಪತಿಗಳ ಪುತ್ರನಾಗಿ 1944ರಲ್ಲಿ ಉಡುಪಿ ಜಿಲ್ಲೆಯ ಬಿಲ್ಲಾಡಿ ಸಮೀಪದ ಮಜ್ಜಿಗೆಬೈಲು ಎಂಬಲ್ಲಿ ಜನಿಸಿದರು. ಕೇವಲ ಐದನೇ ತರಗತಿಯವರೆಗಿನ ಶಿಕ್ಷಣವನ್ನು ಪಡೆದ ಇವರು,ಕಲಾವಿದರಾಗಿದ್ದ ತನ್ನ ತಂದೆಯವರಿಂದಲೇ ಯಕ್ಷಗಾನದ ಜ್ಞಾನವನ್ನು ಪಡೆದುಕೊಂಡು,ಆನೆಗುಡ್ದೆ ವಿನಾಯಕ ದೇವಸ್ಥಾನದಲ್ಲಿ ಗೆಜ್ಜೆ ಕಟ್ಟಿ, ಕೊಡವೂರು ಮೇಳದಲ್ಲಿ ರಂಗಪ್ರವೇಶ ಮಾಡಿದರು. ಯಕ್ಷಗಾನ ರಂಗದಲ್ಲಿ ಕಠಿಣ ಪರಿಶ್ರಮ ಮತ್ತುಅಧ್ಯಯನಶೀಲ ಗುಣಗಳಿಂದಲೇ ಹಂತ ಹಂತವಾಗಿ ಮೇಲೆರುತ್ತ ಬಂದ ಇವರು,ತನ್ನ ತಂದೆಯವರ ರಾವಣ,ಭೀಮ,ವಲಲ ಮೊದಲಾದ ವೇಷಗಳಿಂದ ಪ್ರಭಾವಿತರಾಗಿ,ಹಿರಿಯ ಕಲಾವಿದರ ರಂಗನಡೆಯನ್ನು ನೋಡಿ,ಕೇಳಿ, ಕಲಿತು ಬಡಗುತಿಟ್ಟಿನ ಹಿರಿಯ ಕಲಾವಿದರ ಸಾಲಿನಲ್ಲಿ ಮರೆಯಾಗದ ಹೆಜ್ಜೆಗುರುತು ಮೂಡಿಸಿದ ಹಿರಿಯ ಕಲಾವಿದರು.. ಆಕರ್ಷಕವಾದ, ಸದೃಢವಾದ, ಶರೀರ ಮತ್ತು ಶಾರೀರವನ್ನು ಹೊಂದಿರುವ ಇವರು, ಎರಡನೆಯ ಮತ್ತು ಪುರುಷ ಪಾತ್ರಗಳೆರಡನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ..ತನ್ನ ಗಜ ಗಾಂಭೀರ್ಯದ ರಂಗನಡೆ,ಸುಂದರವಾದ ವೇಷಗಾರಿಕೆ,ಪ್ರೌಢ ಸಾಹಿತ್ಯ ಮತ್ತು ಸ್ಪಷ್ಟ ಮಾತುಗಾರಿಕೆಯ ಮೂಲಕ ಎಲ್ಲ ಪಾತ್ರಗಳಿಗೂ ಜೀವತುಂಬಿ ಅಭಿನಯಿಸಬಲ್ಲ ಕಲೆಯನ್ನು ಕರಗತ ಮಾಡಿ ಕೊಂಡ ಹಿರಿಯ ಕಲಾವಿದರಿವರು.. ಕೊಡವೂರು,ಪೆರ್ಡೂರು,ಗೋಳಿಗರಡಿ,ಸಾಲಿಗ್ರಾಮ, ಅಮೃತೇಶ್ವರಿ,ಮಾರಣಕಟ್ಟೆ ಮೊದಲಾದ ಮೇಳಗಳಲ್ಲಿ ಸುದೀರ್ಘ ಐದು ದಶಕಗಳ ಕಾಲ ಸೇವೆಸಲ್ಲಿಸಿದ ಇವರು,ಎರಡು ದಶಕಗಳಿಗೂ ಹೆಚ್ಚು ಕಾಲ ಮಂದಾರ್ತಿ ಮೇಳವೊಂದರಲ್ಲೇ ಸೇವೆ ಸಲ್ಲಿಸಿರುವುದು ಅವರ ಯಕ್ಷಜೀವನದ ಸುವರ್ಣ ಯುಗ.. ಜಾನುವಾರುಕಟ್ಟೆ ಭಾಗವತರು, ಮರಿಯಪ್ಪಾಚಾರ್, ಶಿರಿಯಾರ ಮಂಜು ನಾಯಕ್, ಅರಾಟೆ ಮಂಜುನಾಥ, ಹಳ್ಳಾಡಿ ಮಂಜಯ್ಯ ಶೆಟ್ಟಿ, ಕೋಡಿ ಶಂಕರ ಗಾಣಿಗ, ಮೊಳಹಳ್ಳಿ ಹೆರಿಯ ನಾಯ್ಕ, ಉಡುಪಿ ಬಸವ, ಮತ್ಯಾಡಿ ನರಸಿಂಹ ಶೆಟ್ಟಿ,ಹೆರಂಜಾಲು ಸುಬ್ಬಣ್ಣ ಮೊದಲಾದ ಹಿರಿಯ ಕಲಾವಿದರ ಸಾಂಗತ್ಯದಲ್ಲಿ ಸಾರ್ಥಕ ತಿರುಗಾಟವನ್ನು ನಡೆಸಿದ್ದಾರೆ . ಹಾರಾಡಿ -ಮಟಪಾಡಿ ತಿಟ್ಟುಗಳ ಸಮನ್ವಯ ಸಾಧಿಸಿ ರಂಗದಲ್ಲಿ ಮೆರೆದ ಇವರು ಕರ್ಣ,ಅರ್ಜುನ,ಸುಧನ್ವ,ತಾಮ್ರಧ್ವಜ, ಮಾರ್ತಾಂಡತೇಜ, ಚಿತ್ರಸೇನ, ಪುಷ್ಕಳ,ಕೃಷ್ಣ,ವೀರಮಣಿ, ಜಾಂಬವ, ಬಲರಾಮ,ಭೀಷ್ಮ,ದಕ್ಷ,ಕಮಲಭೂಪ, ಯಯಾತಿ ಮೊದಲಾದ ಪಾತ್ರಗಳ ಮೂಲಕ ಜನಮನ್ನಣೆ ಪಡೆದಿದ್ದರು.. ಜೋಡಾಟದಲ್ಲಿ ರಂಗಸ್ಥಳದ ಕಾವು ಹೆಚ್ಚಿಸಬಲ್ಲ ಇವರು, ಜೋಡಾಟದಲ್ಲಿ ಮಂಡಿ ತಿರುಗುವುದರಲ್ಲಿ ದಾಖಲೆ ನಿರ್ಮಿಸಿದ್ದರು. ಆಧುನಿಕತೆಯ ಭರಾಟೆಯಲ್ಲಿ ಕಳೆದು ಹೋಗದೆ,ಸಾಂಪ್ರಾದಾಯಿಕ ಸೊಗಡನ್ನೇ ಮೈಗೂಡಿಸಿಕೊಂಡ ಇವರು ,ಪೆರ್ಡೂರು ಮೇಳದಲ್ಲಿದ್ದ ಕಾಲದಲ್ಲಿ ನಗರ ಜಗನ್ನಾಥ ಶೆಟ್ಟಿ ಮತ್ತು ಐರೋಡಿ ಗೋವಿಂದಪ್ಪನವರೊಂದಿಗಿನ ಇವರ ಪೌರಾಣಿಕ ಪಾತ್ರಗಳು ಜನಮನ್ನಣೆಗೆ ಪಾತ್ರವಾಗಿದ್ದವು.. ಬಡಗುತಿಟ್ಟಿನ ಪರಂಪರೆಯ ವೇಷದಾರಿಯಾಗಿ ಸೇವೆಸಲ್ಲಿಸಿ,ನಡುತಿಟ್ಟಿನ ಯಕ್ಷಭೂಮಿಯಲ್ಲಿ ತನ್ನದೇ ವಿಶಿಷ್ಟ ಹೆಜ್ಜೆಗುರುತು ಮೂಡಿಸಿ ರಂಗದಿಂದ ನಿವೃತ್ತರಾಗಿರುವ ,76ರ ಹರೆಯದ ಶೆಟ್ಟರು,ಪ್ರಸ್ತುತ ಶಿರಿಯಾರ ಸಮೀಪದ ಯಡಾಡಿಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ..,ಶ್ರೀಮತಿ ರತಿ ಶೆಡ್ತಿಯವರನ್ನು ಪತ್ನಿಯಾಗಿ ಸ್ವೀಕರಿಸಿ, ಸವಿತಾ,ಕವಿತಾ ಮತ್ತು ಸಂತೋಷಿನಿ ಎನ್ನುವ ಮೂವರು ಹೆಣ್ಣು ಮಕ್ಕಳನ್ನು ಪಡೆದಿರುವ ಇವರು ಸುಖ ಸಂತೃಪ್ತ ಜೀವನವನ್ನು ಸಾಗಿಸುತ್ತಿದ್ದಾರೆ ... ತನ್ನ ಪ್ರಾಮಾಣಿಕತೆ ಮತ್ತು ಕಲಾನಿಷ್ಠೆಗಾಗಿ ಜಾಗತಿಕ ಬಂಟರ ಸಂಘದಿಂದ ಸನ್ಮಾನ,ಉಡುಪಿ ಕಲಾರಂಗ ಪ್ರಶಸ್ತಿ,ಮಸ್ಕತ್ ಕನ್ನಡ ಸಂಘದಿಂದ ಸನ್ಮಾನ,ಹಾರಾಡಿ ರಾಮಗಾಣಿಗ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಯನ್ನು ಈಗಾಗಲೇ ಮುಡಿಗೇರಿಸಿಕೊಂಡಿರುವ ಶೆಟ್ಟರು, ಸಾಲಿಗ್ರಾಮ ಮಕ್ಕಳ ಮೇಳದ ಸಂಸ್ಥಾಪಕರಲ್ಲೊಬ್ಬರಾದ ಸಾಹಿತಿ ಮತ್ತು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣಾ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಜನವರಿ 14ರಂದು ಕೋಟ ಪಟೇಲರ ಮನೆಯಲ್ಲಿ ನಡೆಯುವ ಸಮಾರಂಭದಲ್ಲಿ,ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.. ಮಂದಾರ್ತಿ ಶ್ರೀದುರ್ಗಾಪರಮೇಶ್ವರಿಯೂ ಇವರಿಗೆ ಇನ್ನು ಹೆಚ್ಚಿನ ಯಶಸ್ಸನ್ನು ನೀಡಲಿ ಮತ್ತು ಇವರ ವಿಶ್ರಾಂತ ಜೀವನ ಸುಖಮಯವಾಗಿ ಸಾಗಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ.. ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ.. This is the story of the yakshaartists and the story of life. Today our yakshaganas are the veteran artists of Badgutti, Majgebailu Ananda Shetty. He is a leading artist eminent in the traditional and yakshagana framework and has brought value to the yakshagana theatre. Ananda Shettar, who had been united in the two styles of badaguthitta, haradi and matpadi tittu, was born in 1944 to the son of madjibailu chandaiah shetty and chandamma shetty, the famous artistes of Badaguthitta, at Majhibailai near Bhiladi in Udupi district. He had studied only up to fifth standard and took knowledge of Yakshagana from his father, who was an artist, tied a gage at the Anegudde Vinayaka temple and entered the theater at Kodavur mela. He has been gradually uplifted by his hard work and studies in the field of Yakshagana, and he is influenced by his father's disguises like Ravana, Bhima, Valala, and has seen the stage of the veteran artistes, listening and learning and making a footprint among the veteran artistes of Badagutti. Attractive, strong, body and body, he has managed both the second and the male characters. He is a great artist who has mastered the art of life and life through his elegant disguise, his beautiful costume, mature literature and clear speech. ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ. ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334

No comments:

Post a Comment

#ಯಕ್ಷಮಂದಾರ - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ |

🌀ಯಕ್ಷ💥ಮಂದಾರ🌀 #ಯಕ್ಷಮಂದಾರ  - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ...